Samutkarsh IAS Academy Samutkarsh IAS Nation Building through IAS
All activities
Sirsi

Shraddha Medha valedictory ceremony

ದಿನಾಂಕ 6-1-24 ರಂದು ಸಮುತ್ಕರ್ಷ ಶಿರಸಿಯ ಶ್ರದ್ಧಾ ಮತ್ತು ಮೇಧಾ ತರಗತಿಗಳ ಸಮಾರೋಪ ಸಮಾರಂಭ ನಡೆಯಿತು.

ಸಮುತ್ಕರ್ಷದ ಶೈಕ್ಷಣಿಕ ವಿಭಾಗದ ವಕ್ತಾರರಾದ ಶ್ರೀ ವಿನೋದ ದೇಶಪಾಂಡೆಯವರು ಮಾತನಾಡಿ, ಸಮುತ್ಕರ್ಷದ ಧ್ಯೇಯೋದ್ದೇಶಗಳ ಕುರಿತಾಗಿ ಮತ್ತು ಈ ತರಗತಿಗಳ ನಂತರದ ಮುಂದಿನ ದಿನಗಳಲ್ಲಿ ಯಾವ ರೀತಿಯಾಗಿ ತನ್ನ ಕಾರ್ಯಕ್ರಮಗಳನ್ನು ಜೋಡಿಸಿಕೊಂಡಿದೆ ಎನ್ನುವುದನ್ನು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಆರ್. ಜಿ. ನಾಯ್ಕ, ಧರ್ಮದರ್ಶಿಗಳು ಮಾರಿಕಾಂಬಾ ದೇವಾಲಯ ಶಿರಸಿ ಇವರು ವಿದ್ಯಾರ್ಥಿಗಳು ಕಲಿಕೆಯ ಹಂತದಲ್ಲಿ ಚೆನ್ನಾಗಿ ತಮ್ಮನ್ನು ತೊಡಗಿಸಿಕೊಂಡು, ಆಸಕ್ತಿಯಿಂದ ಜ್ಞಾನ ಸಂಪಾದಿಸಿಕೊಳ್ಳಬೇಕೆಂದು ತಿಳಿಸಿದರು.

ಅತಿಥಿಗಳಾಗಿದ್ದ ಡಾ. ರಾಘವೇಂದ್ರ ಹೆಗಡೆಕಟ್ಟೆ, ಪ್ರಾಂಶುಪಾಲರು ಚೈತನ್ಯ ಪದವಿಪೂರ್ವ ಕಾಲೇಜು ಶಿರಸಿ ಇವರು ಮಾತನಾಡಿ, ಮಕ್ಕಳು ತಂದೆ-ತಾಯಿ, ಗುರುಗಳ ಮಾತುಗಳನ್ನು ಗೌರವಿಸಿ,‌ಅವರ ನುಡಿಯಂತೆ ನಡೆದಾಗ ಉತ್ತಮ‌ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ತಿಳಿಸಿದರು.

ವಿದ್ಯಾರ್ಥಿಗಳು ಮತ್ತು ಪಾಲಕರು ಶ್ರದ್ಧಾ ಮತ್ತು ಮೇಧಾ ತರಗತಿಗಳ ಕುರಿತಾಗಿ ಸದಭಿಪ್ರಾಯ ವ್ಯಕ್ತಪಡಿಸಿದ್ದರು.

ಮಕ್ಕಳಿಗೆ ಸರ್ಟಿಫಿಕೇಟ್ ಮತ್ತು ಪುಸ್ತಕಗಳನ್ನು ವಿತರಿಸಲಾಯಿತು.

ವಿದ್ಯಾರ್ಥಿಗಳು ಸಂಘಟನಾ ಮಂತ್ರ ಮತ್ತು ವಂದೇ ಮಾತರಂ ಗೀತೆಗಳನ್ನು ಪ್ರಸ್ತುತಪಡಿಸಿದರು. ಶ್ರೀ ಬಿ. ಡಿ. ನಾಯ್ಕ ಇವರು ಸ್ವಾಗತಿಸಿದರು. ಸಮುತ್ಕರ್ಷ ಶಿರಸಿಯ ಕೊ ಹೆಡ್ ಆಗಿರುವ ಶ್ರೀ ಗೌರವ ಪ್ರಭು ಹಾಗೂ ಇತರ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶ್ರೀಮತಿ ಸಂಧ್ಯಾ ಶಾಸ್ತ್ರಿಯವರು ವಂದನಾರ್ಪಣೆ ಮತ್ತು ಕಾರ್ಯಕ್ರಮದ ನಿರ್ವಹಣೆ ಮಾಡಿದರು.

ಸಭಾ ಕಾರ್ಯಕ್ರಮದ ನಂತರದಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಮುತ್ಕರ್ಷ ಮಕ್ಕಳು ತಯಾರಿಸಿದ ನ್ಯೂಸ್ ಪೇಪರ್, ಚಿತ್ರ ಮತ್ತು ಕರಕುಶಲ ವಸ್ತುಗಳ ಪ್ರದರ್ಶನ ನಡೆಯಿತು.

Photos from January 2024