ಸಮುತ್ಕರ್ಷ ತಂಡದ ಎಲ್ಲಾ ಗೌರವಾನ್ವಿತ ಸದಸ್ಯರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ.... ಇಂದು ಮುಂಜಾನೆ 10 ಗಂಟೆಗೆ ಸರಿಯಾಗಿ ಖ್ಯಾತವಾಗ್ಮಿಗಳು ಬಹುಮುಖ ಕಲಾವಿದರಾಗಿರುವ ಡಾಕ್ಟರ್ ಜಿ ಎಲ್ ಹೆಗಡೆ ಇವರಿಂದ ಸಮತ್ಕರ್ಷ ಶ್ರದ್ಧಾ ಮೇಧ ತಂಡದ ತರಬೇತಿಯ ಉದ್ಘಾಟನೆಯು ದೀಪ ಬೆಳಗಿಸುವುದರ ಮೂಲಕ ನೆರವೇರಿತು... ನಂತರ ಮಾತನಾಡಿದ ಶ್ರೀಯುತರು ಸಮತ್ಕರ್ಷ ಸಂಘಟನೆಯ ಕುರಿತಾಗಿ ಹರ್ಷವನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಹನುಮಂತ್ ಶಾನಭಾಗ್ ರವರು ವಹಿಸಿದ್ದರು. ತಂಡದ ಪ್ರಮುಖರಾದ ಶ್ರೀ ಹರಿಶ್ಚಂದ್ರ ಗುನಗಾರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಂಡದ ಎಲ್ಲಾ ಸದಸ್ಯರ ಹಾಜರಾತಿಯು ಕಾರ್ಯಕ್ರಮದ ಯಶಸ್ಸಿಗೆ ಕಾರಣವಾಯಿತು. ದಾಖಲಾತಿಯನ್ನು ಹೊಂದಿದ ಎಲ್ಲ ಮಕ್ಕಳು ಅವರ ಪಾಲಕರು ಸಹ ಉಪಸ್ಥಿತರಿದ್ದರು....