ಇಂದು ಮುಂಜಾನೆ 9ಗಂಟೆಗೆ ಸರಿಯಾಗಿ ಹುಬ್ಬಳ್ಳಿ ಬಿವಿಬಿ ಕ್ಯಾಂಪಸ್ ನಲ್ಲಿ ಸಮುತ್ಕರ್ಷದ ಮೊದಲನೇ ಸೆಷನ್ ನಡೆಯಿತು. ಸಂಘಟನಾ ಮಂತ್ರದೊಂದಿಗೆ ಸೆಷನ್ ಪ್ರಾರಂಭವಾಯಿತು. ಐಎಎಸ್ ತರಬೇತುದಾರರಾದ ಪವನ್ ಅವರು ಮಕ್ಕಳಿಗೆ ಪ್ರಚಲಿತ ವಿದ್ಯಮಾನಗಳ ಬಗ್ಗೆ ವಿವರಿಸಿದರು. ಅಲ್ಲದೆ ವರ್ತಮಾನ ಪತ್ರಿಕೆಯನ್ನು ಓದುವ ರೀತಿ , ಅದರಲ್ಲಿರುವ ಪ್ರಮುಖ ವಿಷಯಗಳನ್ನು ಟಿಪ್ಪಣಿ ಮಾಡಿಕೊಳ್ಳುವ ಬಗೆಯನ್ನು ವಿಶದವಾಗಿ ವಿವರಿಸಿದರು. ಅಲ್ಲದೆ ಇತಿಹಾಸ, ಭೂಗೋಳದ ವಿಷಯಗಳನ್ನು ಸರಳವಾಗಿ ವಿವರಿಸಿದರು. ಮಕ್ಕಳಿಗೆ ಮುಂದಿನ ಸೆಷನ್ನಲ್ಲಿ ಅವರದೇ ಆದ ವೃತ್ತಪತ್ರಿಕೆ ಯನ್ನು ರೂಪಿಸಿ ತರಲು ಹೇಳಲಾಯಿತು.