ರವಿವಾರ ದಿನಾಂಕ 15.10.2023 ಸಮ್ಮತ್ಕರ್ಷ ಶ್ರದ್ಧಾ ಮತ್ತು ಮೇಧ ತರಗತಿಯನ್ನು ಯಶಸ್ವಿಯಾಗಿ ಮುಗಿಸಲಾಯಿತು. ಡಾಕ್ಟರ್ ಸೌಮ್ಯಶ್ರೀ ಶರ್ಮಾರವರು ಅಭ್ಯಾಸಗಳು ಹಾಗೂ ಹವ್ಯಾಸಗಳ ಕುರಿತಾಗಿ ಮಾಹಿತಿಯನ್ನು ನೀಡುತ್ತಾ ಯಾವುದು ನಮ್ಮ ಜೀವನಕ್ಕೆ ಒಳ್ಳೆಯದು, ಯಾವುದು ನಮ್ಮ ಜೀವನಕ್ಕೆ ಕೆಟ್ಟದ್ದು ಎನ್ನುವುದರ ಕುರಿತಾಗಿ ಮಕ್ಕಳೊಂದಿಗೆ ಚರ್ಚಿಸಿದರು... ನಂತರ ಪ್ರತಿ ಮಗು ತನ್ನ ಹವ್ಯಾಸ ಹಾಗೂ ತಾನು ರೂಢಿಸಿಕೊಂಡು ಬಂದ ಬೇಡವಾದ ಅಭ್ಯಾಸಗಳ ಕುರಿತು ಮುಕ್ತವಾಗಿ ಹಂಚಿಕೊಂಡರು... ತದನಂತರದಲ್ಲಿ ಶ್ರೀ ಜಯದೇವ ಬಳಗಂಡಿಯವರು ಪ್ರಶ್ನೋತ್ತರ ವಿಧಾನದ ಮೂಲಕ ಒಂದಿಷ್ಟು ಮಕ್ಕಳಿಗೆ ಅವಶ್ಯಕ ವಿಚಾರವನ್ನು ಹಂಚಿಕೊಂಡರು... ನಂತರದಲ್ಲಿ ಶ್ರೀಮತಿ ಸುಜಾತಾ ಶಾನಭಾಗ್ ರವರು ಜೀವನಕ್ಕೆ ಅನ್ವಯಿಸಿಕೊಳ್ಳಬೇಕಾದ ಕೆಲವು ವಿಷಯಗಳ ಕುರಿತು ಚರ್ಚಿಸಿ ಬ್ರಾಹ್ಮಿ ಮುಹೂರ್ತದ ಮಹತ್ವವನ್ನು ತಿಳಿಸಿ ಪ್ರತಿದಿನ ಮುಂಜಾನೆ ಬೇಗ ಏಳುವ ಟಾಸ್ಕ್ ನೀಡಿದರು. ಎಲ್ಲ ಮಕ್ಕಳು ಖುಷಿಯಿಂದ ತರಗತಿಯಲ್ಲಿ ಪಾಲ್ಗೊಂಡಿದ್ದರು .